ಶಿವಮೊಗ್ಗ: ಕಲ್ಲಹಳ್ಳಿ ಸಿರಿಚಂದನ ಸೇವಾ ಸಂಸ್ಥೆ ವತಿಯಿಂದ ವಿನೋಬನಗರದ ಗಣಪತಿ ದೇವಸ್ಥಾನ ಬಳಿಯ ಮಾದವ ನೆಲೆ ಸಭಾಂಗಣದಲ್ಲಿ ಭಾನುವಾರ 70ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಶಾಲಾ,ಕಾಲೇಜು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅಂದದ ಕನ್ನಡ ಕೈ ಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕನ್ನಡದ ಪರಂಪರೆ ನಾಡುನುಡಿಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಸಂಸ್ಥೆಯ ಉಪಾದ್ಯಾಕ್ಷರಾದ ಗೀತ ಗೌಡ್ರು ಪ್ರಾಸ್ತವಿಕ ನುಡಿಯಲ್ಲಿ ಸಿರಿಚಂದನ ಸೇವಾ ಸಂಸ್ಥೆಯ ಕಾರ್ಯ ವೈಕರಿ ಕನ್ನಡ ನಾಡಿನ ಹಿರಿಮೆ ಬಗ್ಗೆ ಹಾಗೂ ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.
ಸಂಚಾಲಕರಾದ ಎಸ್. ಆರ್. ಸತೀಶ ಮಾದವನೆಲೆ, ಎಸ್. ಆರ್. ಎನ್. ಎಂ. ಎನ್. ಸಿ. ಕಾಲೇಜು ಪ್ರಾಧ್ಯಾಪಕರಾದ ಎಂ.ಗೀತಾ ಅವರು ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಕನ್ನಡ ಪತ್ರಿಕೆಗಳನ್ನು ಓದುವ ಬಗ್ಗೆ ಕರ್ನಾಟಕದ ಏಕೀಕರಣದ ಬಗ್ಗೆ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಎನ್. ಬಸವರಾಜ ಮಾತನಾಡಿ,’ ತಾಯಿಯನ್ನು ತಾಯ್ಯಾಡನ್ನು ಗೌರವಿರುಸುವ ಬಗ್ಗೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಜ್ಞಾನವನ್ನು ವೃದ್ಧಿಸಿಕೊಳ್ಳುವ ಬಗ್ಗೆ ತಿಳಿಸಿದರು.
ಸಂಘಟನಾ ಕಾರ್ಯದರ್ಶಿಗಳಾದ ಶೋಭ ದೇವರಾಜ ಹಾಗೂ ಮಮತ ಕೆ. ಆರ್ ವೇದಿಕೆಯನ್ನು ಅಲಂಕರಿಸಿದ್ದರು.
ಕಾರ್ಯದರ್ಶಿ ಟಿ. ರಮೇಶ ಇವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು .
ಕಲ್ಪನ ವೀರೇಶ್ ಸ್ವಾಗತ ಕೋರಿದರು. ಶಿವಕುಮಾರ ಕೆ. ಎಸ್ ನಿರೂಪಣೆ ಹಾಗೂ ಶಿವಕುಮಾರ ಎಸ್ ಪಿ ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯ ಮುಕ್ತಾಯಗೊಳಿಸಲಾಯಿತು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
📞 9113834502
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ
'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment